ಏಕೈಕ ಪರಿಹಾರ
ಕಾವೇರಿಯನ್ನು ಮತ್ತೆ ಹರಿಯುವಂತೆ ಮಾಡುವ ಸರಳ ಮಾರ್ಗವೆಂದರೆ ಮರಗಳನ್ನು ನೆಡುವುದು.
242 ಕೋಟಿ ನೆಡಲು ರೈತರಿಗೆ ಬೆಂಬಲ ನೀಡಿ
ಈ ಅಭಿಯಾನವು ರೈತರಿಗೆ ಅರಣ್ಯಕೃಷಿಯ ಮೂಲಕ 242 ಕೋಟಿ ಮರಗಳನ್ನು ನೆಡಲು ಸಹಾಯ ಮಾಡುತ್ತದೆ, ಇದು ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಮರದ ಹಸಿರು ಹೊದಿಕೆಯಿಂದ ಆವೃತವಾಗುವಂತೆ ಮಾಡುತ್ತದೆ.
ಅರಣ್ಯಕೃಷಿ
ನೀರಿನ ತೀವ್ರತರ ಬಳಕೆ ಮಾಡುವ ಸಾಂಪ್ರದಾಯಿಕ ಬೆಳೆಗಳಿಂದ ದೀರ್ಘಾವಧಿಯ ಅರಣ್ಯಕೃಷಿ ಪದ್ಧತಿಗೆ ಬದಲಾಯಿಸಲು ರೈತರಿಗೆ ಸಹಾಯಧನ ನೀಡುವುದರಿಂದ ಮತ್ತು ಪ್ರೇರೇಪಿಸುವುದರಿಂದ ನಮ್ಮ ವಿಷನ್-ಅನ್ನು ಸಾಧಿಸಲಾಗುವುದು. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹಣ್ಣಿನ ಮರ ಮತ್ತು ವಾಣಿಜ್ಯ ಮರಗಳನ್ನು ಬೆಳೆಸುವುದು ಅಥವಾ ಪೂರ್ಣ ಪ್ರಮಾಣದಲ್ಲಿ ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಳ್ಳುವುದೇ ಅರಣ್ಯಕೃಷಿ.